ಹಾಸನ: ನಡು ರಸ್ತೆಯಲ್ಲಿ ವಾಮಾಚಾರ ;ಸಾರ್ವಜನಿಕರಲ್ಲಿ ಆತಂಕ




ಹಾಸನ: ನಗರದ ಬಸವೇಶ್ವರ ಬಡಾವಣೆಯ ನಡು ರಸ್ತೆಯಲ್ಲಿ ವಾಮಾಚಾರ ಮಾಡಲಾಗಿದ್ದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. 

ಶುಕ್ರವಾರ ಸಂಜೆ ಹಾಸನ ಬೇಲೂರು ರಾಜ್ಯ ಹೆದ್ದಾರಿ ಪಕ್ಕದಲ್ಲಿನ ಬಸವೇಶ್ವರ ಬಡಾವಣೆಯ ಅಡ್ಡ  ರಸ್ತೆಯ ಮಧ್ಯದಲ್ಲಿ ಯಾರೋ ಒಂದು ಬಿಳಿ ಹಾಳೆಯಲ್ಲಿ ರೇಕೆಗಳು ಹಾಗೂ ಕೆಲವು ಮಂತ್ರಗಳನ್ನು ಬರೆದಿರುವ ಮತ್ತು ಒಂದು ಮಡಕೆಗೆ ಕೆಂಪು ಬಣ್ಣದ ವಸ್ತ್ರ ವನ್ನು ಬಿಗಿದಿದ್ದು ಅದನ್ನು ಬಿಳಿ ಹಾಳೆಯ‌ ಮೇಲಿರಿಸಿ ರಸ್ತೆ ಮದ್ಯ ಇಟ್ಟು ಹೋಗಿದ್ದಾರೆ.

ಇದನ್ನು ಗಮನಿಸಿದವರು ಫೋಟೋ ಕ್ಲಿಕ್ಕಿಸಿದ್ದು .ಇದನ್ನು ಇಲ್ಲಿ ಏಕೆ ಇರಿಸಲಾಗಿದೆ ಎಂಬ ಅನುಮಾನ ಕಾಡಿದೆ .ಅಲ್ಲದೆ ನ್ಯಾಯಾಧೀಶರ ವಸತಿ ಸಂಕೀರ್ಣ ಕೂಗಳತೆ ದೂರದಲ್ಲೆ ಇದ್ದು ಯಾರೋ ಮಾಟ ಮಂತ್ರ ಮಾಡಿಸಿದ್ದಾರೆ ಎಂಬುದು ಇಲ್ಲಿನ ನಿವಾಸಿಗಳ ಅನುಮಾನ.

Post a Comment

0 Comments