ಚನ್ನರಾಯಪಟ್ಟಣ ಬಳಿ ಕಾರಿನ‌ ಡಿಕ್ಕಿಯಲ್ಲಿ ಸುಟ್ಟು ಹೋದವನ ಕಥೆ ಬಯಲಾಯ್ತು

ಚನ್ನರಾಯಪಟ್ಟಣ ದ ಬಳಿ ಕಾರಿನ ಸಮೇತ ಡಿಕ್ಕಿಯಲ್ಲಿ ಸುಟ್ಟುಹೋದ ಅಪರಿಚಿತ ಶವ ಪತ್ತೆಯಾಗಿತ್ತು.‌ ಎಸ್ ಪಿ ಶ್ರೀನಿವಾಸಗೌಡ ಮಾರ್ಗದರ್ಶನದಲ್ಲಿ ಪ್ರಕರಣದ ಬೆನ್ನು‌ಹತ್ತಿದ ಚನ್ನರಾಯಪಟ್ಟಣ ಪೊಲೀಸರು ಸತ್ತು ಹೋದವ ಚನ್ನರಾಯಪಟ್ಟಣ ತಾಲೂಕಿನ‌ ಲಕ್ಷ್ಮೀಪುರದ ದಿನೇಶ ಎಂದು ಪತ್ತೆ ಹಚ್ಚಿದ್ದರು. ಪ್ರಕರಣದ ತನಿಖೆ ನಡೆಸಿದಾಗ ಆತನ ಪತ್ನಿ, ಮಾವ ಹಾಗೂ ಭಾವಮೈದ ಒಟ್ಟಾಗಿ ದಿನೇಶನನ್ನು ಕೊಲೆಗೈದು ಕಾರಿನ ಡಿಕ್ಕಿಯಲ್ಲಿ ಸುಟ್ಟ    ವಿಷಯ ತಿಳಿದು ಬಂದಿದೆ.‌ ಆರೋಪಿಗಳನ್ನು ಪೊಲೀಸರು ಬಂದಿಸಿದ್ದಾರೆ. ದಿನೇಶನಿಗೆ  ಅಭಿಲಾಶ ಎಂಬುವವರ ಜೊತೆ ಮದುವೆಯಾಗಿ ಎರಡು ಮಕ್ಕಳಿವೆ. ಆದರೂ ಈತ ಸಂಬಂಧದಲ್ಲಿ ತಂಗಿಯಾಗುವ ದೊಡ್ಡಪ್ಪನ ‌ಮಗಳನ್ನು ಮದಯವೆಯಾಗಿದ್ದ. ಈ ಘಟನೆಯಿಂದ ಅಪಮಾನವಾಯಿತೆಂದು ಭಾವಿಸಿದ ಪತ್ನಿ, ಮಾವ, ಮೈದ ಸೇರಿ ಕೊಲೆ ಮಾಡಿದ್ದರು ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

Post a Comment

0 Comments