ಗಾಂಜಾ ವಶ: ಆರೋಪಿ ಬಂಧನ ಹೊಳೆನರಸೀಪುರ: ತಾಲೂಕಿನ ಹಳೇಕೋಟೆ ಹೋಬಳಿ ಚಾಕೇನಹಳ್ಳಿಯಲ್ಲಿ ಶುಂಠಿ ಬೆಳೆ ಮಧ್ಯೆ ಗಾಂಜಾ ಬೆಳೆದಿದ್ದ ವ್ಯಕ್ತಿಯೋವ೯ನನ್ನು ಬಂಧಿಸಲಾಗಿದೆ.

ಗಾಂಜಾ ವಶ: ಆರೋಪಿ ಬಂಧನ
ಹೊಳೆನರಸೀಪುರ: ತಾಲೂಕಿನ ಹಳೇಕೋಟೆ ಹೋಬಳಿ ಚಾಕೇನಹಳ್ಳಿಯಲ್ಲಿ ಶುಂಠಿ ಬೆಳೆ ಮಧ್ಯೆ ಗಾಂಜಾ ಬೆಳೆದಿದ್ದ ವ್ಯಕ್ತಿಯೋವ೯ನನ್ನು ಬಂಧಿಸಲಾಗಿದೆ.
ಚಾಕೇನಹಳ್ಳಿಯ ಪ್ರಕಾಶ್ ಬಂಧಿತ ಆರೋಪಿ. ಈತ ಗಾಂಜಾ ಬೆಳೆದಿರುವುದರ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು 2.5ಲಕ್ಷಕ್ಕೂ ಅಧಿಕ ಬೆಲೆ ಬಾಳುವ ಹಸಿ ಗಾಂಜಾದ ಸೊಪ್ಪನ್ನು ವಶಕ್ಕೆ ಪಡೆದಿದ್ದಾರೆ.
ಸಕಲೇಶಪುರ ಉಪ ವಿಭಾಗ ಅಬಕಾರಿ ಉಪ ಅಧೀಕ್ಷಕ ಎಂ.ಎಚ್ ರಘು ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಹೊಳೆನರಸೀಪುರ ವಲಯ ಅಬಕಾರಿ ನಿರೀಕ್ಷಕ ಶಂಕರಪ್ಪ,ಜಾಜ್೯,ಉಪ ನಿರೀಕ್ಷಕ ದೀಪಕ್,ಉಪ ತಹಸೀಲ್ದಾರ್ ಶಿವಕುಮಾರ್ ಹಾಗೂ ಗ್ರಾಮ ಲೆಕ್ಕಿಗರಾದ ದಿವ್ಯ ಹಾಜರಿದ್ದರು.

Post a Comment

0 Comments