ಹಾಸನ: ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಅನುಮಾನಾಸ್ಪದ ಸಾವು



ಗಂಡನ ಮನೆಯವರ ವಿರುದ್ಧ ಕೊಲೆ ಆರೋಪ

ಪತಿಯ ಮನೆ ಮುಂದೆ ಶವವಿಟ್ಟು ಕುಟುಂಬಸ್ಥರ ಆಕ್ರೋಶ

ಚನ್ನರಾಯಪಟ್ಟಣ ತಾಲ್ಲೂಕು ಗೂಳಿಹೊನ್ನೇನಹಳ್ಳಿ‌ ಗ್ರಾಮದಲ್ಲಿ ಘಟನೆ

ಲಕ್ಷ್ಮಿದೇವಿ(೨೨) ಮೃತ ದುರ್ದೈವಿ

ಒಂದೂವರೆ ವರ್ಷದ ಹಿಂದೆ ಮೃತ ನೆಟ್ಟೇಕೆರೆ ಗ್ರಾಮದ ಲಕ್ಷ್ಮಿದೇವಿ-ಗುರುರಾಜ ಅವರ ವಿವಾಹ ನೆರವೇರಿತ್ತು

ನಿಮ್ಮ ಮಗಳು ಹೆಣ್ಣು ಮಗು ಹೆತ್ತಿದ್ದಾಳೆ.

ಹೀಗಾಗಿ ಐದು ಲಕ್ಷ ಹಣ ತೆಗೆದುಕೊಂಡು ಬಾ ಎಂದು ಕಿರುಕುಳ ನೀಡುತ್ತಿದ್ದರು

ಹಣ ತರದಿದ್ದಕ್ಕೆ ಪತಿಯ ಮನೆಯವರೇ ಮಗಳನ್ನು ನೇಣು ಬಿಗಿದು ಕೊಲೆ ಮಾಡಿದ್ದಾರೆ ಎಂದು ಆರೋಪ

ಮೃತಳ ತಂದೆ ಶಿವಲಿಂಗೇಗೌಡ, ತಾಯಿ ಸುಮಿತ್ರರಿಂದ ಹಿರೀಸಾವೆ ಪೊಲೀಸ್ ಠಾಣೆಗೆ ದೂರು

ಘಟನೆ ನಂತರ ನಾಪತ್ತೆಯಾಗಿರುವ ಪತಿಯ ಮನೆಯವರು

ತಕ್ಷಣ ಮೃತ ಲಕ್ಷ್ಮಿದೇವಿ ಪತಿಯ ಮನೆಯವರನ್ನು ಬಂಧಿಸುವಂತೆ ಸಂಬಂಧಿಕರ ಆಗ್ರಹ

ಬಾಗಿಲು ಹಾಕಿರುವ ಪತಿಯ ಮನೆಯುಂದೆ ಶವವಿಟ್ಟು ಆಕ್ರೋಶ

ಪತಿಯ ಮನೆಯವರು ಬಾರದಿದ್ದರೆ ಮನೆಯ ಮುಂದೆಯೇ ಅಂತ್ಯ ಸಂಸ್ಕಾರ ಮಾಡಿ ಹೋರಾಟ ಮಾಡುವ ಎಚ್ವರಿಕೆ

ಸ್ಥಳದಲ್ಲಿ ಬಿಗುವಿನ ವಾತಾವರಣ

ಸ್ಥಳಕ್ಕೆ ದೌಡಾಯಿಸಿದ ಹಿರೀಸಾವೆ ಠಾಣೆ ಪೊಲೀಸರು

ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ

Post a Comment

0 Comments