ಮಂತ್ರವಾದಿ ಸೋಗಿನಲ್ಲಿ ವಂಚನೆ: ಸಿಕ್ಕಿಬಿದ್ದು ಗೂಸಾ ತಿಂದ ಕಳ್ಳ ಅರ್ಚಕ

ಮಂತ್ರವಾದಿ ಸೋಗಿನಲ್ಲಿ ವಂಚನೆ: ಸಿಕ್ಕಿಬಿದ್ದು ಗೂಸಾ ತಿಂದ ಕಳ್ಳ ಅರ್ಚಕ

ಹಾಸನ: ದೇವರ ಹೆಸರಲ್ಲಿ ಅಮಾಯಕ ಜನರಿಗೆ ಮಂಕು ಬೂದಿ ಎರಚಿ ಹಣ ವಸೂಲಿ ಮಾಡುತ್ತಿದ್ದ ಕಳ್ಳ ಅರ್ಚಕ ಸೇರಿ ಇಬ್ಬರಿಗೆ ಗ್ರಾಮಸ್ಥರು ಗೂಸಾ ಕೊಟ್ಟು ಚಳಿ ಬಿಡಿಸಿದ ಘಟನೆ ಸಮೀಪದ ಗಾಣಿಗರ ಹೊಸಳ್ಳಿಯಲ್ಲಿ ನಡೆದಿದೆ. ನಗರದ ತಣ್ಣೀರುಹಳ್ಳದ ನಿವಾಸಿ ದಿಲೀಪ ಮತ್ತವನ ಸಹಾಯಕ ರಾಜಣ್ಣ ಸಿಕ್ಕಿ ಬಿದ್ದವರು.

ಗಾಣಿಗರ ಹೊಸಳ್ಳಿ ಗ್ರಾಮದ ಧರ್ಮ ಮತ್ತು ಕುಮಾರ್ ಎಂಬುವರು ಕೌಟುಂಬಿಕ ಸಮಸ್ಯೆ ಹಿನ್ನೆಲೆಯಲ್ಲಿ ದಿಲೀಪನನ್ನು ಸಂಪರ್ಕ ಮಾಡಿದ್ದರು.
ಮಾಟ-ಮಂತ್ರ ಮಾಡಿದರೆ ನಿಮ್ಮ ಸಮಸ್ಯೆಗೆ ಪರಿಹಾರ ಸಿಗಲಿದೆ. ಇದಕ್ಕಾಗಿ 1 ಲಕ್ಷ ರೂ. ವೆಚ್ಚಲಾಗಲಿದೆ ಎಂದು ಹೇಳಿ ದಿಲೀಪ ಹಣ ಪಡೆದಿದ್ದ. ಮಂತ್ರವಾದಿ ಹೇಳಿದಂತೆ ಮಾಡಿದರೂ, ಗ್ರಾಮಸ್ಥರ ಸಮಸ್ಯೆಗೆ ಪರಿಹಾರ ಸಿಕ್ಕಿರಲಿಲ್ಲ. 

ಕಡೆಗೊಂದು ದಿನ ನಿಮಗೆ ಆಗದವರು ಮನೆಯ ಸಮೀಪ ಹಂದಿ ತಲೆ ಹೂತಿದ್ದಾರೆ. ಅದನ್ನು ಹೊರ ತೆಗೆದರೆ ಎಲ್ಲವೂ ಪರಿಹಾರವಾಗಲಿದೆ ಎಂದು ನಂಬಿಸಿದ. ಅದಕ್ಕಾಗಿ ದಿಲೀಪನನ್ನು ಗ್ರಾಮಕ್ಕೇ ಕರೆದುಕೊಂಡು ಹೋಗಿ ಆತ ಸೂಚಿಸಿದ ಜಾಗ ಅಗೆದರೂ ಯಾವುದೇ ತಲೆ ಸಿಗಲಿಲ್ಲ. ಈ ವೇಳೆ ಅನುಮಾನಗೊಂಡು ಆತನನ್ನು ಹಿಡಿದು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಆ ಡೋಂಗಿ ಎಂಬುದು ಖಾತ್ರಿಯಾಗಿದೆ. ನಂತರ ದಿಲೀಪ ಮತ್ತು ಸಹಾಯಕರಿಗೆ ಧರ್ಮದೇಟು ನೀಡಿದಾಗ ಸತ್ಯ ಬಾಯಿ ಬಿಟ್ಟಿದ್ದಾರೆ. ಜನರು ಮಲಗಿದ್ದ ಕುಡಿಕೆ ಹೂಣುವುದೂ ಸೇರಿದಂತೆ ಎಲ್ಲವನ್ನೂ ಮಾಡಿ ಮೋಸ ಮಾಡಿರುವುದು ನಿಜ. ಇದೇ ಅನೇಕ ಕಡೆ ಪ್ರಮಾದ ಮಾಡಿದ್ದೇನೆ. ನಾನು ಪಡೆದಿರುವ ಹಣವನ್ನು ವಾಪಸ್ ನೀಡುತ್ತೇನೆ ಎಂದು ತಪ್ಪೊಪ್ಪಿಕೊಂಡಿದ್ದಾನೆ.

Post a Comment

0 Comments